Menu
ಒಂದ್ ಕಥೆ ಹೇಳ್ಲಾ!!

ನಾನುಈಗ ಹೇಳೋಕೆ ಹೊರ್ಟಿರೋ ಕಥೆ, ಸುಮಾರು ತಿಂಗಳ ಹಿಂದೆ ಅಥವಾ ವರ್ಷದ ಹಿಂದೆ ಯಾವ್ದೋ YouTube channel ಇಲ್ಲಾಂದ್ರೆ IGTVಯಲ್ಲಿ ಕೇಳಿರೋದು. ಅದು ಹಿಂದಿಯಲ್ಲಿ ಕೇಳಿರೋದ, English.... ನೆನಪು ಇಲ್ಲ. ಆದ್ರೆ ಅದು ನಮ್ಮ ಮಾತೃ ಭಾಷೆ ಕನ್ನಡದಲ್ಲಿ Translate ಆಗಿ ನನ್ನ ತಲೇಲಿ ಕಥೆಯ ಸಾರಾಂಶ ಹಾಗೆ ಇದೆ. ಅದ್ನ ಇವತ್ತು ನಿಮಗೆ ಹೇಳ್ತೀನಿ. ಮುಖ್ಯವಾಗಿ ಈ ಕಥೆ ಮೇಲೆ ಅಥವಾ Content ಮೇಲೆ copy right ಇದ್ರೆ ಅದು ಅವರಿಗೆ ಸೇರಬೇಕು. ಯಾಕಂದ್ರೆ ನಾನು ಎಲ್ಲೋ ಕೇಳಿರೋ ಕಥೆನ ನಿಮಗೆ ಹೇಳ್ತಾಇರೋದು ಅಷ್ಟೇ.

ಇದು ಕಟ್ಟು ಕಥೆನ ಅಥವಾ ನಿಜವಾಗಿ ನಡ್ದಿರೋದ ಗೊತಿಲ್ಲ. ಆದ್ರೆ ಒಳ್ಳೆ ಸಂದೇಶ ಅಂತೂ ಇದೆ ಮುಂದೆ ಓದಿ.

ತಾಯಿ ಅನ್ನೋಳು ಹೆಚ್ಚ ಅಥವಾ ಹೆಂಡತಿ ಅನ್ನೋಳು ಹೆಚ್ಚ ಅಂತ ಒಂದ್ ಕಾಲೇಜ್‘ಲಿ ಚರ್ಚಾಸ್ಪರ್ದೆ ಇಡ್ತಾರೆ. ತುಂಬಾ ಜನ ತಾಯಿ ಪರ ಮಾತಾಡೋಕೆ ತಯಾರು ಇರ್ತಾರೆ, ಆದ್ರೆ ಒಬ್ನೇ ಹೆಂಡತಿ ಅನ್ನೋ ಪರ ಮಾತಾಡೋಕೆ ಬರ್ತಾನೆ. ಅವ್ನು ಮಾತಾಡೊ ಕೆಲವೇ ಕೆಲವು ಅಂಶಗಳನ್ನ ಕೇಳಿ ಅಲ್ಲಿ ಸೇರಿರೋ ಜನ ಚಪ್ಪಾಳೆ ಹೊಡೀತಾರೆ.

ಈ ಚರ್ಚಾಸ್ಪರ್ದೆ ಮಾಡ್ಬೇಕು ಅಂತ ತಯಾರು ಮಾಡಿದಂತ ಕಾಲೇಜ್, ಒಂದ್ ಹುಡುಗನ ಹತ್ರ ಬಂದು ಕೇಳ್ತಾರೆ. ಈ ತರ ಚರ್ಚಾಸ್ಪರ್ದೆ ಇಟ್ಟಿದೀವಿ. ಆದ್ರೆ ಹೆಸರು ಕೊಟ್ಟಿರೋ ಎಲ್ಲರೂ ತಾಯಿ ಪರ ಮಾತಾಡ್ತಾ ಇದಾರೆ, ಹೆಂಡತಿ ಪರ ಮಾತನಾಡೋಕೆ ಯಾರು ಇಲ್ಲ, ದಯವಿಟ್ಟು ನೀನು ತಯಾರು ಆಗ್ತೀಯಾ ಅಂತ ಕೇಳ್ತಾರೆ. ಪರ ವಿರೋಧ ಮಾತು ಆಗಿಲ್ಲ ಅಂದ್ರೆ ಚರ್ಚಾಸ್ಪರ್ದೆ ಅನ್ನೋದಕ್ಕೆ ಅರ್ಥಾನೇ ಇರಲ್ಲ ನೋಡಿ. ಆ ಹುಡುಗ ಯೋಚನೆ ಮಾಡಿ ಸರಿ ಅಂತಾನೆ. ಆ ದಿನ ಅವ್ನು ಸ್ಟೇಜ್ ಮೇಲೆ ಬಂದು ಕೆಲವು ಅ೦ಶಗಳನ್ನ ಹೇಳ್ತಾನೆ.

ಪುರಾಣಗಳ ಪ್ರಕಾರ ಈ ಭೂಮಿ ಮೇಲೆ ಮೊದಲು ಬಂದಿದ್ದು ಒಂದು ಗಂಡು ಒಂದು ಹೆಣ್ಣು. (ಅಂದ್ರೆ ಗಂಡ ಹೆಂಡತಿ) ತಾಯಿ ಮಗ ಅಲ್ಲ...

ಯಾವ ಹೆಣ್ಣು ಸಹ ಮೊದಲು ಹೆಂಡತಿ ಆಗ್ತಾಳೆ ಆಮೇಲೆ ಅವಳು ತಾಯಿ ಆಗೋದು...

ಎಲ್ಲರೂ ಇದರ ಬಗ್ಗೆ ಯೋಚನೆ ಮಾಡ್ತ ಇದ್ರೆ ಅವ್ನು ಇನ್ನೂ ಮುಂದೆ ಹೇಳ್ತ ಹೋಗ್ತಾನೆ;

ಯಾವ್ದಾದ್ರೂ ಒಂದು ವ್ಯಕ್ತಿ ತೀರ್ಕೊಂಡ್ರೆ ಆ ವ್ಯಕ್ತಿ ಭಾವಚಿತ್ರನ ಅವನ ಹೆಂಡತಿ ಭಾವಚಿತ್ರದ ಜೊತೆ ಹಾಕ್ತಾರೆ ವಿನಹ ಅವನ ತಾಯಿ ಭಾವಚಿತ್ರದ ಜೊತೆ ಅಲ್ಲ...

ರಾಮನ ಜೊತೆ ಕಾಡಿಗೆ ಹೋಗಿದ್ದು, ಪಾಂಡವರ ಜೊತೆ ಅಜ್ಞಾತವಾಸ ಮಾಡಿದ್ದು ಅವ್ರ ಹೆಂಡತಿಯರೇ ವಿನಹ ಅವರ ತಾಯಿ ಅಲ್ಲ. ಒಂದು ಹೆಣ್ಣು ತಾಯಿಯಾಗಿ ಎಷ್ಟು ತ್ಯಾಗ ಮಾಡ್ತಾಳೋ ಅದಕಿಂತ ಜಾಸ್ತಿ ತ್ಯಾಗ ಅವಳು ಹೆಂಡತಿ ಆಗಿ ಮಾಡ್ತಾಳೆ, ಮದುವೆ ಆದ ತಕ್ಷಣ ತನ್ನ ಮನೆ ಬಿಟ್ಟು ಗಂಡನ ಮನೆಗೆ ಹೋಗಿ ಸೇರುತ್ತಾಳೆ ತನ್ನ ಕೊನೆ ಉಸಿರು ಇರೋವರ್ಗೂ ಅದೇ ಮನೆಲಿ ಇರುತ್ತಾಳೆ ಅದು ಒಂದು ತ್ಯಾಗ ಅಲ್ವಾ. ಗಂಡನಿಗೋಸ್ಕರ ಎಲ್ಲವನ್ನೂ ಮಾಡ್ತಾಳೆ, ಅದು ಒಂದು ತ್ಯಾಗ ಅಲ್ವಾ...

ಮತ್ತೆ ಮುಂದೆ ಹೋಗ್ತಾ ಹೇಳ್ತಾನೆ, ತಾಯಿ ಪರ ಮಾತನಾಡೋಕೆ ಬಂದಿರೋರು ಎಲ್ಲ, ತಾಯಿಯ ತ್ಯಾಗಮಮತೆ ಎಲ್ಲದರ ಬಗ್ಗೆ ದೊಡ್ಡ ಪಟ್ಟಿ ಮಾಡ್ಕೊಂಡು ಬಂದಿರ್ತಾರೆ, ಅವೆಲ್ಲವೂ ಸ್ವಾಗತಾರ್ಹವೇ. ಯಾವ್ದನ್ನೂ ತೆಗ್ದು ಹಾಕೊ ಹಾಗೆ ಇಲ್ಲ, ಆದರೆ ಅವಳು ತಾಯಿಗೂ ಮುಂಚೆ ಒಂದು ಹೆಂಡತಿ ಆಗಿರ್ತಾಳೆ ಅಂತ ಅವ್ನು ಹೇಳ್ತಾನೆ...

ಕೊನೆಯದಾಗಿ ಅವ್ನು ಒಂದು ಮಾತು ಹೇಳ್ತಾನೇ, ಇಲ್ಲಿ ಇರೋರು ಎಲ್ಲರೂ, ನಾನು ಹೆಂಡತಿ ಅಂತ ಮಾತಾಡ್ತಾ ಇದ್ರೆ ನೀವು ಆದ್ರ ಬಗ್ಗೆ ಯೋಚನೆ ಮಾಡ್ತೀರಾ, ತಾಯಿ ಅಂತ ಮಾತಾಡಿದ್ರೆ ತಾಯಿ ಬಗ್ಗೆ ಯೋಚನೆ ಮಾಡ್ತೀರಾ. ಆದ್ರೆ ಈ ನಮ್ಮ ಯೋಚನೆಯೇ ತಪ್ಪು. ಈ ತಾಯಿ ಮತ್ತು ಹೆಂಡತಿ ಇಬ್ರೂ ಒಂದು ಹೆಣ್ಣು, ನಾವು ಮೊದಲು ಹೆಣ್ಣಿಗೆ ಗೌರವ ಕೊಡಬೇಕು. ಮತ್ತೊಂದು ಜೀವಕ್ಕೆ ಗೌರವ ಕೊಡಬೇಕು ಈ ಹೆಂಡತಿ ಅಥವಾ ತಾಯಿ ಮಾಡೋ ತ್ಯಾಗ ಒಂದಕ್ಕೊಂದು ಹೋಲಿಕೆ ಮಾಡೋದೇ ತಪ್ಪು. ಯಾರ್ ತ್ಯಾಗ ದೊಡ್ಡದು ಯಾರ್ ತ್ಯಾಗ ಚಿಕ್ಕದು ಅನ್ನೋದಕ್ಕಿಂತ ತ್ಯಾಗಕ್ಕೆ ಗೌರವ ಕೊಡ್ಬೇಕು. ಇಷ್ಟು ಹೇಳಿ ಅವ್ನು ಮಾತು ಮುಗಿಸಿದ ತಕ್ಷಣ ಇಡೀ ಸಭೆ ಅವನಿಗೆ ಎದ್ದು ನಿಂತು ಚಪ್ಪಾಳೆ ಹೊಡಿಯತ್ತೆ

ಕೊನೆಗೆ ಈ ಚರ್ಚಾಸ್ಪರ್ದೆ ಬಹುಮಾನ ಯಾರಿಗೆ ಬಂತು ಗೊತಿಲ್ಲ, ಆದ್ರೆ ಒಂದ್ ಅಂತೂ ಸತ್ಯ. ಇಡೀ ತರಗತಿ ಒಂದು ವಿಷಯದ ಪರ ಮಾತಾಡೋಕೆ ನಿಂತ್ರೆ, ಇವ್ನು ಒಬ್ನೇ ಇನ್ನೊದು ವಿಷಯದ ಪರ ನಿಂತ. ಸೋಲು ಗೆಲುವು ಅನ್ನೋದಕ್ಕಿಂತ, ಸ್ಪರ್ಧಾ ಮನೋಭಾವ ಮುಖ್ಯ. ಅವನಲ್ಲಿದ್ದ ಆ ಛಲ, ವಿಶ್ವಾಸ ಅವನನ್ನೂ ಇನ್ನೊದು ಹಂತಕ್ಕೆ ತೆಗೆದುಕೊಂಡು ಹೋಗತ್ತೆ.

ಪ್ರವಾಹದ ವಿರುದ್ದ ಈಜೋದು ಕಷ್ಟ ನೋಡಿ. ಈಜಿ ಗೆದ್ರೇ ಅದೊಂದು ಇತಿಹಾಸ, ಮತ್ತೊಬ್ಬರಿಗೆ ಸ್ಪೂರ್ತಿ.